ದೆವ್ವಗಳ ಹೋರಾಟ

ರಾತ್ರಿಯೆಲ್ಲಾ ಅಂಗಳದಲ್ಲಿ
ಏನು ಚೀರಾಟ ಏನು ಕಿರುಚಾಟ
ಏನೆಂದು ನೋಡಿದರೆ ದೆವ್ವಗಳೆರಡರ
ಮಧ್ಯೆ ಭಯಂಕರ ಹೋರಾಟ

ಬಾವಿ ದೆವ್ವ ಹಣ್ಣನು ತಿಂದಿದೆ
ಅಂತ ಹುಣಸೆಯ ಆರೋಪ
ಹುಣಸೆ ದೆವ್ವ ನೀರನು ಕುಡಿದಿದೆ
ಅಂತ ಬಾವಿಗೆ ಕೋಪ

ಕೇಳಿ ಕೇಳಿ ಸಹಿಸಲಾರದೆ
ಆಲದ ಮರದಿಂದ
ಇಳಿದು ಬಂತು ಆಲದ ದೆವ್ವ
ಇದ್ದವರಲದೇ ಹಿರಿ ದೆವ್ವ

ಏನೆಲೊ ಮೂರ್ಖರೆ ಬುದ್ಧಿಯಿದೆಯಾ?
ಕೂತರೆ ಕೂತುದು ಕೂತವರದೆಯಾ?
ಹಣ್ಣು ನೀರು ಸರ್ವರ ಸೊತ್ತು–
ಹಾಗಂತ ಭಗವದ್ಗೀತೆಯಲಿತ್ತು

ಹೇಳಿ ಕೇಳಿ ಈ ಜನ್ಮ ದೆವ್ವ !
ಮುಂದಿನ ಸಲವಾದ್ರು ಬೇಡವೆ ದಿವ್ಯ?
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಗಳಿಸಿಕೊಳ್ಳಿರೋ ಮೋಕ್ಷ!

ಆಕ್ಷ! ಅಂದಿತು ಹುಣಸೆ ದೆವ್ವ
ಮರವ ಹತ್ತಿ ಮುಗುಂ
ಹಾಕ್ಷ! ಅಂದಿತು ಬಾವಿ ದೆವ್ವ
ಬಾವಿಯೊಳಕ್ಕೆ ಧುಡುಂ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓಲೆಗೊಂದು ಓಲೆ
Next post ಕೆಲಸ ಹುಡುಕುವುದರಲ್ಲಿ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys